ಬೆಂಗಳೂರು: ಬುಧವಾರ ಮಿಷನ್ ರೋಡ್ನಲ್ಲಿ ಅತ್ಯಾಧುನಿಕ, ಸೌಲಭ್ಯಗಳನ್ನು ಹೊಂದಿರುವ ನೂತನ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯನ್ನು ಎನ್.ಯು ಆಸ್ಪತ್ರೆ ಉದ್ಘಾಟನೆಗೊಂಡಿತು. ಇದರೊಂದಿಗೆ ಯೂರಾಲಜಿ, ನೆಫ್ರಾಲಜಿ, ಫರ್ಟಿಲಿಟಿ ಮತ್ತು ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಯಲ್ಲಿ ತನ್ನ ನಾಯಕತ್ವವನ್ನು ಆಸ್ಪತ್ರೆ ಇನ್ನಷ್ಟು ಬಲಪಡಿಸಿಕೊಂಡಂತಾಗಿದೆ.
ಈ ಸೌಲಭ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ಉ ದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸದರು ಹಾಗೂ ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ನಟ ಮತ್ತು ಚಲನಚಿತ್ರ ನಿರ್ದೆಶಕ ರಮೇಶ್ ಅರವಿಂದ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಈ ಆಸ್ಪತ್ರೆಯನ್ನು ಮುಂದಿನ ತಲೆಮಾರಿನ ಆರೋಗ್ಯ ಸೇವಾ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿದ್ದು, ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯ ಮತ್ತು ರೋಗಿ-ಕೇಂದ್ರಿತ ವಿನ್ಯಾಸದ ಸಂಯೋಜನೆಯೊಂದಿಗೆ ಸುಸಜ್ಜಿತವಾಗಿ ಕಟ್ಟಲ್ಪಟ್ಟಿದೆ. ಇನ್ನು ಎನ್ ಯು ಆಸ್ಪತ್ರೆಯ ಛೇರ್ಮನ್ ಡಾ ವೆಂಕಟೇಶ್ ಕೃಷ್ಣಮೂರ್ತಿ ಮಾತನಾಡಿ, ಈ ಆಸ್ಪತ್ರೆ ಸೂಪರ್-ಸೆಷಾಲಿಟಿ ಚಿಕಿತ್ಸೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ಕ್ಲಿನಿಕಲ್ ಪರಿಣತಿ ಮತ್ತು ಡಿಜಿಟಲ್ ನವೀನತೆಯ ಸಮನ್ವಯದ ಮೂಲಕ ಉತ್ತಮ ಫಲಿತಾಂಶಗಳು ಹಾಗೂ ಉನ್ನತ ಮಟ್ಟದ ಚಿಕಿತ್ಸಾ ಅನುಭವವನ್ನು ನೀಡುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ರೂಪಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಡಾ ಪ್ರಸನ್ನ ವೆಂಕಟೇಶ್ ಎಂ. ಕೆ. ಹೇಳಿದ್ದಾರೆ. ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದು ಅತ್ಯಂತ ಅಗತ್ಯವಾಗಿದ್ದು, ಇಂತಹ ಮುಂದಾಳತ್ವಗಳು ನಾಗರಿಕರಿಗೆ ಗುಣಮಟ್ಟದ ಚಿಕಿತ್ಸೆಗೆ ಸುಲಭಪ್ರವೇಶವನ್ನು ಒದಗಿಸುತ್ತವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.













