ಧಾರವಾಡ, ಮೇ ೩೧- ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಉದ್ದಗಲಕ್ಕೂ ಭ್ರಷ್ಟ ತಿಮಿಂಗಲುಗಳ ಬೇಟೆಯಾಡಿದ್ದಾರೆ. ಸುಮಾರು ಆರು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿಗಳು ನಡೆದಿವೆ.
ಇವತ್ತು ಅಂದರೆ ಮೇ ೩೧ ರಂದೇ ಸೇವಾ ನಿವೃತ್ತಿಯಾಗಬೇಕಿದ್ದ ಧಾರವಾಡ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಎಚ್ ಸುರೇಶ್ ನಿವೃತ್ತಿಯಾಗಬೇಕಿದ್ದ ದಿನವೇ ಲೋಕಾಯುಕ್ತ ಬಲೆಗೆ ಬಿದ್ದಿರುವುದು ವಿಶೇಷವಾಗಿದೆ. ಸದರಿ ಅಧಿಕಾರಿಯವರು ಚಿಕ್ಕೋಡಿ ವಲಯ, ಬೆಳಗಾವಿ ವೃತ್ತ ಕಚೇರಿಗಳಲ್ಲಿ ಕೂಡ ಸುಮಾರು ವರ್ಷ ಸೇವೆ ಸಲ್ಲಿಸಿದ್ದಾರೆ.