ಪುಣೆ: ಹಿಂಜೇವಾಡಿಯಿಂದ ನಾನಾ ಪೇಟ್ ಹೋಗುವ ವೇಳೆ ಪ್ರಯಾಣ ದರದ ವಿಚಾರದಲ್ಲಿ ಉಂಟಾದ ಗಲಾಟೆಯ ವೇಳೆ ಕ್ಯಾಬ್ ಚಾಲಕನೊಬ್ಬ ಟೆಕ್ಕಿಗೆ ಎಡಗೈ ಬೆರಳನ್ನು ಕಚ್ಚಿ ಭಾಗಶಃ ತುಂಡಾಗಿರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹಿಂಜೆವಾಡಿ ಐಟಿ ಪಾರ್ಕ್ ನಲ್ಲಿರುವ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 42 ವರ್ಷ ವಯಸ್ಸಿನ ಟೆಕ್ಕಿ ಶಿಫ್ಟ್ ಮುಗಿದ ನಂತರ ನಾನಾ ಪೇಟ್ ನಲ್ಲಿರುವ ಮನೆಗೆ ಹೋಗಲು ರಾಪಿಡೋ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಚಾಲಕ ಪ್ರಯಾಣ ಆರಂಭಿಸುವ ಮೊದಲೇ ದರದ ಕುರಿತು ವಿವಾದ ಆರಂಭಿಸಿದ್ದಾನೆ.
ಐಟಿ ಉದ್ಯೋಗಿ ಕೇಳಿದ ದರದ ಕುರಿತು ಒಪ್ಪಿಗೆ ಸೂಚಿಸದಿದ್ದಾಗ ಕೋಪಕ್ಕೆ ಚಾಲಕ ಬೆರಳನ್ನು ಕಚ್ಚಿ ಭಾಗಶಃ ಕಚ್ಚಿ ತುಂಡಾಗಿಸಿದ್ದಾನೆ.















