ಬೆಳಗಾವಿ: ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, ಅಂಡರ್-14 ವಿಭಾಗದಲ್ಲಿ ದೇಶಕ್ಕೆ ದ್ವಿತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿದ ಡಿ ವೈ ಎಸ್ ಪಿ ಶ್ರೀ ಸದಾಶಿವ ಕಟ್ಟಿಮನಿ ಅವರ ಸುಪುತ್ರಿ ಕುಮಾರಿ ಆರಾಧ್ಯ ಸದಾಶಿವ ಕಟ್ಟಿಮನಿ ಅವರನ್ನು ಪ್ರೋತ್ಸಾಹ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಆರಾಧ್ಯ ಅವರ ಈ ಸಾಧನೆ ಬೆಳಗಾವಿ ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವ ಮೂಲಕ ಭವಿಷ್ಯದಲ್ಲಿ ಭಾರತವನ್ನು ಪ್ರತಿನಿಧಿಸುವ ಶ್ರೇಷ್ಠ ಕ್ರೀಡಾಪಟುವಾಗಿ ಬೆಳೆಯಲಿ ಹಾಗೂ ದೇಶಕ್ಕೆ ಕೀರ್ತಿ ತರಲಿ ಎಂದು ಪ್ರೋತ್ಸಾಹ ಫೌಂಡೇಶನ್ ಪದಾಧಿಕಾರಿಗಳು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಚರ್ಮಕಾರ ಮಹಾ ಸಭಾದ ಅಧ್ಯಕ್ಷ ಭೀಮರಾವ ಪವಾರ ಪ್ರೋತ್ಸಾಹ ಫೌಂಡೇಶನ್ ಅಧ್ಯಕ್ಷ ವಾಸುದೇವ ದೊಡಮನಿ, ಪದಾಧಿಕಾರಿಗಳಾದ ಸಾಗರ ಕಿತ್ತೂರ, ಸಂತೋಷ ಹೊಂಗಲ, ಸುರೇಶ ಸಾಂಗಲಿ, ಹಿರಾಲಾಲ ಚವಾಣ್, ಪ್ರಕಾಶ ಮಾನೆ, ಸಂಜಯ ಚೌಗುಲೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














